ಪೋಸ್ಟ್‌ಗಳು

ಜನವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪುರದಾಳ... ಪುಣ್ಯವಂತರ ನಾಡು...

ಇಮೇಜ್
#ಎಂಟನೇ_ದಿನ....        ನನ್ನ ಪ್ರೀತಿಯ ಫೇಸ್ಬುಕ್ ಸ್ನೇಹಿತರೆ....  ಇಂದು ಪುರದಾಳ ಶಾಲೆಯಲ್ಲಿ #ನನ್ನ_ಎಂಟನೇ_ದಿನ... ಆದರೂ ಆ ಊರಿಗೆ ಬಹಳ #ಹಳೆಯ #ವ್ಯಕ್ತಿ ಏನೋ ಅನ್ನುವಂತ ಭಾವವನ್ನು ಇವತ್ತು ಪುಣ್ಯವಂತರ  ನಾಡು #ಪುರದಾಳ_ಗ್ರಾಮಸ್ಥರು...  ನನ್ನ  ಮನದಲ್ಲಿ ತುಂಬಿ ಬಿಟ್ಟರು...       ಇಲ್ಲಿ ಅವರು ಮಾಡಿದ್ದೂ ಬಹು ದೊಡ್ಡ ಕಾರ್ಯ ಅನ್ನೋದು ನನ್ನ ಮನೋಭಾವ ಏಕೆಂದರೆ...  ನಾನು ಹೋದ ಎಂಟು ದಿನಗಳಲ್ಲಿ ಆ ಊರಿನ ಜನ ಇವತ್ತು ನನ್ನ #ಕೈ #ಹಿಡಿದು #ಮಾತಾಡಿ ಹೇಳಿದರು...             #ಸರ_ನೀವು_ಬಂದಿದ್ದು_ತುಂಬಾ #ಒಳ್ಳೆಯದಾಯಿತು...   ನಿಮ್ಮ ಸಜ್ಜಿ ತೆನಿ ನಾವೆಲ್ಲ ನೋಡೇವ್ರಿ....                          ನಮ್ಮ #ಪುರದಾಳ_ಸಾಲಿ_ಎಲ್ಲರೂ #ಸೇರಿ #ಮೇಲ್ಮಟ್ಟಕ್ಕೆ_ತಗೊಂದು_ಹೋಗುನ್ರಿ #ಅಂದ್ರು....  #ನನ್ನ  #ಕನಸನ್ನು_ಅವರೇ #ಕಟ್ಟಿಕೊಂಡಾಗ ನನ್ನಷ್ಟು #ಭಾಗ್ಯಶಾಲಿ ಇನ್ನೊಬ್ಬ ಇ ಧರೆಯೊಳು ಸಿಗಲಾರ ಅನ್ನೋದು ನನ್ನ  ಕಲ್ಪನೆ....                  ಅದೇನೇ ಆಗಲಿ ನಾವು ಬದುಕಿನಲ್ಲಿ ಪಡೆದಿದ್ದನ್ನೇ ಉತ್ತಮ ಅನ್ನೋದಕ್...
ಇಮೇಜ್
..#ಗೆಳೆಯರೇ... ...   ನಾನು ಇಂದು ಸಿಂದಗಿ ತಾಲೂಕಿನ ಪುರದಾಳಕ್ಕೆ ಕರ್ತವ್ಯಕ್ಕೆ ವರದಿ ಮಾಡಿಕೊಂಡೆ....                 ಹೊಸ ಸರು,  ಹೊಸ ಸರು ಅನ್ನೋ ಸುದ್ದಿ ಶಾಲೆಯ ತುಂಬಾ...  ಆದರೆ ಹತ್ತಿರಕ್ಕೆ ಯಾವ ಮಕ್ಕಳು ಸುಳಿಯಲಿಲ್ಲ..  ಬಾಗಿಲುಗಳ ಸಂದಿಯಿಂದ, ಕಿಟಕಿಯಿಂದ, ಗೋಡೆಯ ಪಕ್ಕದಿಂದ ಊರಿಗೆ ಹೊಸದಾಗಿ ಮದುವೆಯಾಗಿ ಬಂದ ಸೊಸೆಯನ್ನು ಊರಿನ ಎಲ್ಲ ಮುದುಕಿಯರು ಹಣಿಕಿ ಹಾಕಿ ಹಾಕಿ ನೋಡುವಂತೆ ಎಲ್ಲರ ಕಣ್ಣಿಗೆ ಗುರಿಯಾದ #ಮದುವಣಗಿತ್ತಿಯಾಗಿತ್ತು ನನ್ನ ಮನ,  ಅದರ ಮದ್ಯ ಮತ್ತೆ ಮತ್ತೆ #ಸಿಂಧುಗೇರಿ ಶಾಲೆ ನೆನಪಾಗಿ ಕಾಡುತ್ತಿತ್ತು..                       ಬಿಟ್ಟು ಹೋದವ ನೀನೆ ಇನ್ನು ಅನುಭವಿಸು ಎನ್ನುತ್ತಿತ್ತು..    ದಿನಾಲೂ ಸುತ್ತಮುತ್ತ ಇರುವವರಿಗೆ ಸಾಕು ಎನ್ನುವಂತೆ ಮಾತಾಡುವ ನನ್ನ ಬಾಯಿಗೆ ಯಾಕೋ ಬಾಯಿ ಬಿಚ್ಚಬೇಡ ಅನ್ನೋ ಸೂಚನೆ ಮನಸು ನೀಡುತ್ತಿತ್ತು...       ಹಳೆಯ ನೆನಪುಗಳು ಭಾರವಾಗಿ ನನ್ನ ಕರ್ಚಿಫು ಅರಿವಿಲ್ಲದಂತೆ ಕಣ್ಣ ಸಮೀಪ ಹೋಗುತ್ತಿತ್ತು..      ಹಾಗೆ ಹಳೆಯ ನೆನಪಿನಲ್ಲೇ ಮಧ್ಯಾಹ್ನ ಊಟದ ಸಮಯವಾಯಿತು..  #ಸಹ_ಶಿಕ್ಷಕ_ವೃoದ ಹಾಗೂ ಮುಖ್ಯಗುರುಗಳು ನೀಡಿದ #ಧೈರ್ಯಕ್ಕೆ ಮನಸ...
ಇಮೇಜ್
ಸಿದ್ದಗಂಗ ಶ್ರೀಗಳು ಬರೆದಿರುವ  ಒಂದು ಕವಿತೆ* ಸಾಧ್ಯವಾದರೆ ಓಡು ಆಗಲಿಲ್ಲವಾದರೆ ನಡೆ ಅದೂ ಸಾಧ್ಯವಾಗದಿರೆ ಉರುಳಿ ಕೊಂಡು ಹೋಗು ಅಷ್ಟೇ! ಆದರೆ ಕದಲದೇ  ಬಿದ್ದಿರಬೇಡ ಒಂದೇ ಕಡೆ ಕೆಲಸ ಸಿಗಲಿಲ್ಲವೆಂದು, ವ್ಯಾಪಾರ ನಷ್ಟವಾಯಿತೆಂದು ಗೆಳೆಯನೊಬ್ಬ ಮೋಸಮಾಡಿದನೆಂದು, ಪ್ರೀತಿಸಿದವಳು ಕೈಬಿಟ್ಟಳೆಂದು!! ಹಾಗೆ ಇದ್ದರೆ ಹೇಗೆ..? ದಾಹಕ್ಕೆ ಬಾರದ ಸಮುದ್ರದ ಅಲೆಗಳು ಕೂಡಾ ಕುಣಿದು ಕುಪ್ಪಳಿಸುತ್ತವೆ ನೋಡು! ಮನಸು ಮಾಡಿದರೇ... ನಿನ್ನ ಹಣೆಬರಹ ಇಷ್ಟೇ  ಅಂದವರೂ ಸಹ... ನಿನ್ನ ಮುಂದೆ ತಲೆ ತಗ್ಗಿಸುವ  ತಾಕತ್ತು ನಿನ್ನಲ್ಲಿದೆ ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ? ಸೃಷ್ಟಿ ಚಲನಶೀಲ ಯಾವುದೂ ನಿಲ್ಲಬಾರದು ಹರಿಯುವ ನದಿ ಬೀಸುವ ಗಾಳಿ ತೂಗುವ ಮರ ಹುಟ್ಟೋ ಸೂರ್ಯ ಅಂದುಕೊಂಡಿದ್ದನ್ನು ಸಾಧಿಸಬೇಕೆಂದು  ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ ಯಾವುದೂ  ನಿಲ್ಲಬಾರದು. ಏಳು... ಎದ್ದೇಳು ಹೊರಡು... ನಿನ್ನನ್ನು ಅಲಗಾಡದಂತೆ  ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು,  ಬಿದ್ದ ಜಾಗದಿಂದಲೇ ಓಟ ಶುರು ಮಾಡು ನೀನು ಮಲಗಿದ ಹಾಸಿಗೆ  ನಿನ್ನನ್ನು ಅಹಸ್ಯಪಡುವ ಮುನ್ನ  ಅಲಸ್ಯವನ್ನು ಬಿಡು ಕನ್ನಡಿ ನಿನ್ನನ್ನು ಪ್ರಶ್ನಿಸುವ  ಮುನ್ನ ಉತ್ತರ ಹುಡುಕು ನೆರಳು ...

ನೇತಾಜಿ.. ನಿಮಗೆ ಭಾರತವೇ ಮಾತಾಜಿ...

ಇಮೇಜ್
ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ... ಚಿನ್ನದ ಮೊಟ್ಟೆಯಿಡುವ ‘ಐ.ಸಿ.ಎಸ್’ ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು 23, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದು ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ 25 ವರ್ಷಗಳಲ್ಲಿ, 4೦೦೦೦ -45೦೦೦  ಜನರ  ‘ಆಜಾದ್ ಹಿಂದ್ ಫೌಜ’ ಎಂಬ ಸೇನೆಯನ್ನು ಕಟ್ಟಿ “ ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ” ಎಂದು   ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು ‘ನೇತಾಜಿ ಸುಭಾಷ್ ಚಂದ್ರ ಬೋಸ್’. ಸುಭಾಷರು  1897 ರ ಜನವರಿ 23ರಂದು ಒರಿಸ್ಸಾದ ಕಟಕ್ನಲ್ಲಿ ಜನಿಸಿದರು.ಜಲಿಯನ್ ವಾಲಬಾಗ್ನ ದುರಂತ ಸುಭಾಷರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿತ್ತು. ತಂದೆ ಜಾನಕಿನಾಥ ಬೋಸ್ ಮಗ ಎಲ್ಲಿ ‘ಸ್ವಾತಂತ್ಯ್ರ ಹೋರಾಟ’ ಹಾದಿ ಹಿಡಿದುಬಿಡುತ್ತಾನೋ ಎಂಬ ಚಿಂತೆಯಲ್ಲೇ ಅವರನ್ನು ‘ಐ.ಸಿ.ಎಸ್’ಪರೀಕ್ಷೆ ಬರೆಯಲು ಇಂಗ್ಲೆಂಡ್ಗೆ ಕಳಿಸಿದರು,ಆ ಪರೀಕ್ಷೆಯಲ್ಲಿ 4 ನೆಯವರಾಗಿ ತೇರ್ಗಡೆ ಹೊಂದಿದ ಸುಭಾಷರು ಬ್ರಿಟಿಷ್ ಸರ್ಕಾರದ ಪದವಿಯನ್ನು ನಿರಾಕರಿಸಿ ಸ್ವಾತಂತ್ರ್ಯ  ಚಳುವಳಿಗೆ ಧುಮುಕಿದರು.ಕಾಂಗ್ರೆಸ್ಸ್ ಸೇರಿದ ಕೆಲ ವರ್ಷಗಳಲ್ಲೇ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾದರು.  1938ರಲ್ಲಿ ನಡೆದ 51 ನೇ ಹರಿಪುರದ ಕಾಂಗ್ರೆಸ್ಸ್ ಅಧಿವೇಶನ...

ಆಕಸ್ಮಿಕ್ ಭೇಟಿ....

ಇಮೇಜ್
      ಎಲ್ಲವೂ_ಆಕಸ್ಮಿಕ್_ಹಾಗೂ_ತಾತ್ಕಾಲಿಕ್_ಅಲ್ವೇ..??                 ಯಾವುದೋ ಒಂದು ಕಾರಣ ಹೇಳದೆ ಕೇಳದೆ ಬಂದು ಮತ್ತೆ ನನ್ನ ಕನಸುಗಳನ್ನು ಭೇಟಿ ಆಗಿ ಮಾತಾಡಿ, ಅವರಿಗಿಷ್ಟು ಧೈರ್ಯ ಹೇಳಿ ನಾನಿಷ್ಟು ಧೈರ್ಯ ತೆಗೆದುಕೊಂಡು ಬಂದೆ... ಶ್ರೀ ಎಸ್ ಟಿ ಮಿರ್ಗಿ ಗುರುಗಳು ಇ ಬಾಂದವ್ಯ ಮತ್ತೆ ಬಿಸೆದ ಕೊಂಡಿಯಾದರು....                                    ಇಡೀ ಊರಿನಲ್ಲಿ ಮುಂದಿನ 15 ವರ್ಷದ ಸಿಂಧುಗೇರಿ ಇಂದು ನನ್ನ ಹಿಂದಿತ್ತು...  ಸರ ಇನ್ನು ಸ್ವಲ್ಪ ಹೊತ್ತು ಇರಿ.. ಹೋಗ್ಬೇಡಿ ಅನ್ನೋ ಧ್ವನಿ ಈಗಲೂ ನನ್ನ ಕಿವಿಯಲ್ಲಿ ಧ್ವನಿಸುತ್ತಿದೆ...  ಆದ್ರೂ ಮೊನ್ನೆ ಬರುವಾಗ ಅಳು ಮುಖ ನೋಡಿದ್ದೇ..  ಇಂದು ಸ್ವಲ್ಪ ನಗುವನ್ನು ಅವರೆಲ್ಲರ ಮುಖದಲ್ಲಿ ಕಂಡು ಬಂದೆ.                    ಆಕಸ್ಮಿಕ್ ಹಾಗೂ ತಾತ್ಕಾಲಿಕ್ ಭೇಟಿಗಳು ನಮ್ಮ ಮೇಲೆ ನಮ್ಮನ್ನು ಹಚ್ಚಿಕೊ...