ಪೋಸ್ಟ್‌ಗಳು

#ಹಾರಿಹೋದೈದು ವರುಷಗಳು#

ಇಮೇಜ್
ಹಾರಿಹೋದೈದು ವರುಷಗಳು ಇಂದು ದಿನಾಂಕ 18/03/2021 ಎಂದಾಕ್ಷಣ. ಭೂತಕಾಲದ ಬಹು ಅಮೂಲ್ಯ ಚಿತ್ರಗಳು ಮನಸೆಂಬ ಮರೆಯದ ಮೆಮೊರಿಯಲ್ಲಿ , ಕನಸೆಂಬ ಕರಗದ ಸ್ಟೋರೆಜಿನಲ್ಲಿ , ಮೆದುಳೆಂಬ ಮಹತ್ತರ ಗ್ಯಾರೆಜಿನಲ್ಲಿ ವಿನೋದ, ವಿಷಾದಗಳ ಜಂಟಿ ಧ್ವನಿಯನ್ನು ಒಮ್ಮೆಲೆ ಮಾಡುತ್ತಿವೆ.  ಅದು ಬರೀ ಧ್ವನಿಯಲ್ಲ ನನ್ನ ನಂಬಿದ ಕೆಲವು ಜೀವಗಳ ಹೃದಯರಾಗ, ಹಲವು ಕಂಗಳು ಕಂಪಿಸಿ ಕಂಪಿಸಿ ನಕ್ಕ ಯಾಗ, ನಿಂದಿಸಿ ಮಾತಾಡಿದವರು ಚಪ್ಪಾಳೆ ತಟ್ಟಿ ತಮ್ಮ ಬೆರಳನ್ನು ತಮ್ಮ ಗಲ್ಲದ ಮೇಲೆ ಇಡುವಂತೆ ಮಾಡಿದ ಮಹಾತ್ಯಾಗ. ಒಟ್ಟಿನಲ್ಲಿ ವಿದ್ಯೇಯ ಲೋಕ ತೋರಿದ ತಾಯಿ ತಂದೆಗೆ, ಕಲಿಸಿದ ಗುರುಗಳಿಗೆ, ಪಟ್ಟ ಶ್ರಮಕ್ಕ ಸಿಕ್ಕ ಸೂಕ್ತ ಜಾಗ. ಪ್ರತಿದಿನ ಅಮ್ಮ ಬೆಳಿಗ್ಗೆ ನಾಲ್ಕಕ್ಕೆ ಎದ್ದಾಗ ಟಪ ಟಪ ಎಂದು ಬಡಿಸಿಕೊಂಡ ರೊಟ್ಟಿಗಳೆ. ಅವೆಲ್ಲವನ್ನು ಕೂಡಿಸಿಕೊಂಡು ಬುತ್ತಿಯಾಗಲು ಸಹಕರಿಸಿದ ಬುತ್ತಿಪಾಡುಗಳೆ. ಆ ಬುತ್ತಿಯನ್ನು ತಂದು ನಮಗೆ ತಲುಪಿಸುವ "ಮುನ್ನಾನ" ಟೆಂಪುದ ಡ್ರೈವರುಗಳೆ. ಬುತ್ತಿ ತರಲು ಹೋದಾಗ ಸವೆದ ತಮ್ಮನ ಸರಕಾರಿ ಸೈಕಲಿನ ಟೈರುಗಳೆ. ಬುತ್ತಿ ರೂಮಿಗೆ ತಂದು ತಿನ್ನುವಾಗ ದಾಹ ತೀರಿಸಿದ ರೂಮಿನ ಓನರ ರವರ ಬೋರವೆಲಿನ ನೀರೆ.  ಸಂಜೆ ಮನೆಗೆ ಪೋನ ಮಾಡಲು ಅಂದು ಸಹಕರಿಸಿದ ಕ್ವಾಯಿನ ಬಾಕ್ಸಿನ ಕ್ವಾಯಿನಗಳೇ. ಪಲ್ಯ ಇಲ್ಲದಿದ್ದಾಗ ೨ ರೂಪಾಯಿಗೆ ಲಭ್ಯವಾದ ಗಣಪತಿ ಚೌಕನಲ್ಲಿರುವ ಕಾಮತ ಹೋಟೆಲಿ...

ಮದುವೆಯ ಶುಭಾಶಯಗಳು ಗೆಳೆಯ ನಜೀರಅಹ್ಮದ

ಇಮೇಜ್
ಮದುವೆ :------              ಮೂರು ಪದಗಳ ಮಹಾಕಾವ್ಯ, ಇರ್ವರ ರಾಗಗಳ ಸಮ್ಮಿಲನವಾದರೆ ಶ್ರಾವ್ಯ, ಮನೆಯ ಮನಗಳೆಲ್ಲ ಸೇರಿದರೆ ಭವ್ಯ, ದಿನಕ್ಕೊಂದು ಕ್ಷಣಕ್ಕೊಂದು ಆಸೆಗಳ ನವ್ಯ, ಎಲ್ಲವೂ ಖಾಲಿಯಾದ್ರೂ ಕೊನೆಯಾಗದ ದಿವ್ಯ. ಆತ್ಮೀಯ ಗೆಳೆಯ ನಜೀರಸಾಬ ಅವಟಿ (Co-Operative inspector B.Bagewadi.)                                 ನಿನ್ನ ಮನೋಭಾವ ಅತೀ ಸೌಮ್ಯವಾದುದ್ದು, ನಿನ್ನ ಆಲೋಚನೆಗಳು ತುಂಬಾ ರಮ್ಯವಾದವು, ನಿನ್ನ ವ್ಯಕ್ತಿತ್ವ ಬಹಳ ನಮ್ಯವಾದುದ್ದು. ಇದು ಬಸವಣ್ಣನ ಬಾಗೇವಾಡಿಯಲ್ಲಿ ಜನಿಸಿರುವ ನಿನಗೆ ಅಲ್ಲಿನ ಮಣ್ಣಿನ ಗುಣಗಳು ನಿನ್ನ ಮೈಏರಿವೆ ಎನ್ನುವದರಲ್ಲಿ ಎರಡು ಮಾತಿಲ್ಲ. ತುಂಬಾ ವಿಶಾಲ ಮನೋಧರ್ಮದ ಕೌಟುಂಬಿಕ ವಾತಾವರಣ, ಸ್ನೇಹತತ್ವ ಕ್ಕೆ ಯಾವತ್ತೂ ಬದ್ದರಾಗಿ ಜೋತೆಗಿರುವ ಮಹಾಂತೇಶ ಸರ ಹಾಗೂ ವಿಜಯರವರು ನಿನಗೆ ದಕ್ಕಿರುವ ವರಗಳೇ ನಿಜ. ನೀನು ಕೆಲಸ ಮಾಡುತ್ತಿರುವುದು ಕೂಡಾ ಸಹಕಾರಿ ಇಲಾಖೆ. ಸಹಕಾರ ನಿನ್ನ ಮೂಲ ಮಂತ್ರ ಅದಕ್ಕೆ ಇಷ್ಟೆಲ್ಲಾ ಅನುಕೂಲಗಳನ್ನು ಬೇಡದೆ ಪಡೆದಿರುವುದು ನಿನ್ನ ತಪಸ್ಸೆ ಸರಿ ಗೆಳೆಯ.            "ಮನ್ನತವಿಲ್ಲಾ" ಎಂಬ ಮಹಾಮನೆಯನ್ನು ಕಟ್ಟಿ ತಮ್ಮನಾದ ರಿಯಾಜ ಯಾವ...

ದ್ವಂದ್ವಾದರ್ಶಗಳ ಆಯ್ಕೆ

ಇಮೇಜ್
               -- : ದ್ವಂದ್ವಾದರ್ಶಗಳ ಆಯ್ಕೆ :-- ಹಬ್ಬ ಹರಿದಿನಗಳಂದು ಮನೆಯ ಹಿರಿದಾದ ಬಾಗಿಲಿನ ಸೊಬಗನ್ಹೆಚ್ಚಿಸುವ ವಾಸನಾಯೋಗ್ಯ ರಸಸಹಿತ ಮಾವಿನ ಎಲೆಗಳ ತೋರಣದ ಜಾಗವನ್ನು ರಸಹೀನ ಪ್ಲ್ಯಾಸ್ಟಿಕಿನ ತೋರಣ ಬಣ್ಣ ಬಿಂಬಕವಾಗಿ ಜೀವಾಂಶವಿರುವ ಕಣಕ್ಕಿಂತಲೂ ನಿರ್ಜೀವಿ ಕಣ ರಾರಾಜೀಸುತ್ತಿರುವ ಅತ್ಯುನ್ನತ ಕಾಲಘಟ್ಟವಿದು.                        ತರಕಾರಿ, ದವಸ, ಧಾನ್ಯ, ಹಣ್ಣುಗಳ ಪೋಶಕಾಂಶಗಳಿಂದ ಬಿಡುಗಡೆಯಾಗುವ ಜೀವರಸಕಣವನ್ನು ಹೀರಿ ಬಲಿಷ್ಟವಾಗುವ ಕರುಳ ಬಳ್ಳಿಗಳು ಸಹಿತ ಆಧುನಿಕತೆಯ ಪರಾಕಾಷ್ಠೆಯ ನವ ನೂತನ ಜಂಕ ಸಂಸ್ಕೃತಿಯ ಗೊಬಿ ಮಂಚೂರಿ, ಪಾನಿ ಪುರಿ, ಸ್ನ್ಯಾಕ್ಸ, ಭೆಲ್ ಪೂರಿ ಒಂದೇ ಎರಡೆ ಎಣಿಕೆಗೆ ಸಿಗದಷ್ಟು ಜಂಕಿಗಳ ಮೇಲೆ ವಿಶ್ವಾಸಾರ್ಹತೆ ಬೆಳೆಸಿಕೊಂಡಿವೆ. ಇಲ್ಲಿ ಕರುಳ ಬಳ್ಳಿಯ ತಪ್ಪು ಇಲ್ಲ , ಮನೆಯ ಹೆಬ್ಬಾಗಿಲಿನದು ಇಲ್ಲ ಆದರೆ ಮನೆಯ ಹೆಬ್ಬಾಗಿಲಿಗೆ ಮರದ ಎಲೆಯ ವಾಸನೆ ಇಲ್ಲ. ಕರುಳ ಬಳ್ಳಿಗೆ ತಿನ್ನುವ ಅಗುಳಿನ ಶಕ್ತಿಯ ಅರಿವು ಇಲ್ಲ.            ಇನ್ನು ಹಣದ ಸಂಶೋಧನೆಯಾಗದ ಅಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ ಮನುಷ್ಯ, ಮಗು, ಹಿರಿಯರು , ಹೆಣ್ಣುಮಕ್ಕಳು ಅಲ್ಲಗಳೆಯಲಾಗದ ಪಾತ್ರ ನಿರ್ಣಯ ಹೊಂದಿದ್ದರಲ್ಲದೆ ಅಳತೆಯ ಮಾನದ...

ಕಿಗಳೆಲ್ಲಾ ಕವಿಗಳಾದಾಗ ಭಾಗ ೩

ಇಮೇಜ್
ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಮೂರು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ಉಪ ಶೀರ್ಷಿಕೆ ::: ಚೇತನ ಆಗು ನೀ ಅನಿಕೇತನ.... ಅವನೊಬ್ಬ ನಾಲ್ಕನೇ ತರಗತಿಯ ವಿದ್ಯಾರ್ಥಿ, ಮೊನ್ನೆ ನನ್ನ ಬಳಿಗೆ ಬಂದು, ಸಾರ್ ನಾನು ನಾಲ್ಕು ಹಾಡು ಬರೆದಿದ್ದೇನೆ ಚೆಕ್ ಮಾಡ್ತೀರಾ ಅಂದ, ನಾನು ಆಯಿತಪ್ಪ ಮಾರಾಯ ನೀನು ಹಾಡು ಬರದಿದ್ದಿಯಾ ಅಂದೆ.. ಅವನು ಆರೇಳು ಬಾರಿ ಮಡಚಿದ 4 ಚೀಟಿಗಳನ್ನು ನನ್ನ ಕೈಗಿತ್ತ,, ಅವುಗಳನ್ನು ಬಿಚ್ಚಿ ನೋಡಿದ ತಕ್ಷಣ ನನಗೆ ಅನಿಸಿದ್ದೇನು ಗೊತ್ತೆ ಸ್ನೇಹಿತರೆ,, ಕನ್ನಡ ಸಾಹಿತ್ಯ ನಿಜವಾಗಿಯು ಜಗತ್ತಿನ ಎಲ್ಲ ಸಾಹಿತ್ಯಗಳಿಗಿಂತಲೂ ಅತ್ಯದ್ಭುತವಾದ ಸಾಹಿತ್ಯ ಅಂತ, ಯಾಕೆಂದರೆ ಜಗತ್ತಿನ ಅತೀ ಚಿಕ್ಕ ಕವಿ ಯಾರು ಇರಬಹುದು ಅನ್ನೋ ಪ್ರೆಶ್ನೆ Google ಗೆ ಕೇಳಿದರೆ ಅದು ಹೇಳಿತು 14 ವರ್ಷದ ಹುಡುಗ ಅಂತ ಅದಕ್ಕೇನು ಗೊತ್ತು ಹೇಳಿ ಸಿಂಧುಗೇರಿಯಲ್ಲಿರೋ ಚೇತನ ಕೇವಲ ಹತ್ತು ವರ್ಷದ ಹಸುಳೆ ಅನ್ನೋದು,,, Google ತಲೆ ಸರಿ ಇಲ್ಲ ಅನ್ನಿಸಿತು, ಅದಕ್ಕೆ ನಿಮಗೆ ಹಾಗೂ ಈ ಜಗತ್ತಿಗೆ ಚೇತನನ್ನು ತೋರಸಬೇಕು ಅನ್ನಿಸಿತು, ಅದಕ್ಕೆ climax ವೀಡಿಯೋ ಬಿಟ್ಟೆ.... ಹತ್ತನೇ ತರಗತಿಗೆ ಬಂದರು ಸರಿಯಾಗಿ ಅಕ್ಷರಗಳೆ ಬರೆಯಲು ಬಾರದ ಹಲವಾರು ವಿದ್ಯಾರ್ಥಿಗಳನ್ನು ನಾನು ಮತ್ತು ನೀವು ನೋಡಿದ್ದೇವೆ. ಅಂತಹುದರಲ್ಲಿ ನಮ್ಮ ಶಾಲೆಯ ನಾಲ್ಕನೆ ತರಗತಿಯ ಹಸುಳೆಯೊಂದು ನಾಲ್ಕು ಕವನ ಬರೆದದ್ದು ನೋಡಿ, ನನ್ನ ...

ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨

ಇಮೇಜ್
#ಕಿವಿಗಳೆಲ್ಲ_ಕವಿಗಳಾದಾಗ_ಭಾಗ_ಎರಡು 🌹🌹🌹🌹🌹🌹🌹🌹🌹🌹🌹🌹🌹🌹 ನಾನು ಇದುವರೆಗೂ ಅವರಿಗೆ ನೀಡಿದ ಪ್ರೆಶ್ನೆಗಳು ಈ ಕೆಳಗಿವೆ....       ನನ್ನ (ವಿದ್ಯಾಥಿಯ) 1) ನನ್ನ ಜೀವನದ ಗುರಿ ಏನು ಮತ್ತು ಏಕೆ ? 2) ನನ್ನ ಪ್ರೀತಿಯ ಅಮ್ಮನಿಗಾಗಿ ಎರಡು ಪುಟ ಬರವಣಿಗೆ ? 3) ನಾನು ನನ್ನ ನೆರೆ ಹೊರೆಯವರೊಂದಿಗೆ ಹೇಗಿರಬೇಕು ? ಹಾಗೂ ಅವ್ರು ನನ್ನೊಂದಿಗೆ ಅವ್ರು ಹೇಗಿರಬೇಕು ? 4) ನನ್ನ ಪ್ರಕಾರ ನನ್ನ ಊರು ಹೇಗಿರಬೇಕು ? 5) ನನ್ನ ಶಾಲೆಗೆ ನಾನು ಹೇಗೆ ಕೀರ್ತಿ ತರಬೇಕು ? 6) ನನ್ನ ಪ್ರಕಾರ ನನ್ನ ದೇಶದ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ? 7) ನನ್ನ ಕುಟುಂಬದ ವಂಶ ವೃಕ್ಷ ಹಾಗೂ ಶಿಕ್ಷಣ ? 8) ನಾನು ಕೆಟ್ಟವನೋ /ಳೋ ಅಥವಾ ಒಳ್ಳಯವನೋ/ ಳೋ ಕಾರಣ ಸಹಿತಿ ವಿವರಣೆ ???? 9) ಜೀವನದಲ್ಲಿ ನೋವು ದುಃಖ ಕಷ್ಟ ಅವಶ್ಯವೇ ? ಏಕೆ ? 10) ಜೀವನದಲ್ಲಿ ಶಾಂತಿ ಸಹನೆ ಪ್ರಾಮಾಣಿಕತೆ ನಂಬಿಕೆಗಳು ಎಷ್ಟು ಪ್ರಮುಖವಾದವುಗಳು ಬರೆಯಿರಿ.. 11) ಮಳೆಗೆ ಮನವಿ ಶೀರ್ಷಿಕೆ ಅಡಿಯಲ್ಲಿ ಕವನ ಬರೆಯಿರಿ ? 12 ) ನಮ್ಮ ಗೆಳೆತನ ಕುರಿತು ಕವನ ಬರೆಯಿರಿ ?.???? ಇಂತಹ ಪ್ರೆಶ್ನೆಗಳಿಗೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಉತ್ತರಿಸಬಹುದಾ ಎಂದು ನೀವು ಗಾಬರಿಯಾದರೆ; ಆಶ್ಚರ್ಯವೇನು ಇಲ್ಲ, ಯಾಕೆಂದರೆ ಅವ್ರು ಬರೆಯೋ ಉತ್ತರ ನೋಡಿ ನಿಮಗಿಂತ ಹೆಚ್ಚಿಗೆ ಗಾಬರಿಯಾಗಿದ್ದಕ್ಕೆ ನಾನು ಈ ಲೇಖನ ಬ...

ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

ಇಮೇಜ್
#ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಒಂದು 🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹 ನನ್ನ ಪ್ರೀತಿಯ ವಿದ್ಯಾರ್ಥಿಗಳೆಲ್ಲಾ ಸರ್ ನೀವು ಹೇಳಿದಂತೆ ಕೇಳುತ್ತೇವೆ, ಯಾವತ್ತೂ ತಪ್ಪು ಮಾಡೋದಿಲ್ಲ, ದಯವಿಟ್ಟು ನಮ್ಮ ಕ್ಲಾಸಿಗೆ ಬನ್ನಿ ಸರ್ ಎಂದು 5 ನೇ ತರಗತಿಯ ಎದುರು ನಿಂತು ಗೋಗರೆದಿದ್ದರು. ಅವರ ಈ ಮಾತಿಗೆ ನಾನೂ ಕೇಳಿಸಿಕೊಂಡರು ಕಿವಿಗೊಡದೆ ಮತ್ತಷ್ಟು ನನ್ನ ಸಿಟ್ಟನ್ನು ಪ್ರದರ್ಶಿಸಿದ್ದೆ. ಅದಕ್ಕೆ ಅವರೆಲ್ಲ ಸೇರಿ ಗೌಂಡಿ ಸಾರ್ ನಮ್ಮ ಕ್ಲಾಸಿಗೆ ಬರುತ್ತಿಲ್ಲ ಎಂದು ಮುಖ್ಯ ಗುರುಗಳಾದ ಕು. ಎಸ್ ಎಸ್ ಎಲಿಬಳ್ಳಿ ಗುರುಗಳಿಗೆ ದೂರು ನೀಡಿದ್ದರು. ನನಗೆ ಬುಲಾವ್ ಬಂತೂ ತುಂಬಿದ ಶಿಕ್ಷಕರ ಸಭೆ ಬಾಡಿದ ನನ್ನ ವಿದ್ಯಾರ್ಥಿಗಳ ಮುಖ ನೋಡಿ ಅಯ್ಯೋ!! ಪಾಪ ವೆನಿಸಿತು, ಆದರೂ ನಾನೂ ನನ್ನ ಸಿಟ್ಟನ್ನು ಬಿಟ್ಟಿರಲಿಲ್ಲ ಸಭೆಯಲ್ಲಿ ಆಫೀಸಿನ ಕೆಲಸದ ಕಾರಣಕ್ಕೆ ನಿಮ್ಮ ತರಗತಿಗೆ ಬರಲು ಆಗಲಿಲ್ಲ ಎಂದು ಏನೇನೋ ವಾದ ಮಾಡಿ ತಪ್ಪು ನನ್ನದಿದ್ದರು ನನ್ನದೆ ಸರಿ ಎನ್ನುವಂತೆ ಮಾತಾಡಿದ್ದೆ,. ವಿದ್ಯಾರ್ಥಿಗಳೆಲ್ಲಾ ಹೀಗೆ ಮಾಡಿದ್ದು ನಾನೂ ಎಷ್ಟು ದಿನ ಅವ್ರ ಕ್ಲಾಸಿಗೆ ಹೋಗುವದನ್ನು ಬಿಟ್ಟಿದ್ದಕ್ಕೆ ಗೊತ್ತೆ ? ಅದು ಒಂದು ವರೆ ದಿನ. ನಾನೂ ಅವ್ರ ಕ್ಲಾಸಿಗೆ ಹೋಗದಿರುವದು ಅವರಿಗೆ ಎಷ್ಟು ನೋವಾಗಿತ್ತೊ ಗೊತ್ತಿಲ್ಲ ಆದರೆ ; ನನಗಂತೂ ಎಂದು ಮೆರೆಯಲಾಗದ ನೆನಪು. ಮುಖ್ಯ ಗುರುಗಳ ಸೂಚನೆಯಂತೆ ಅವರ ಕ್ಲಾಸಿಗೆ...

ಛೇ !! ಎಷ್ಟು ದಪ್ಪ ಚರ್ಮಿಗರು ನಾವು....??

ಇಮೇಜ್
ಛೇ !! ಎಷ್ಟು ದಪ್ಪ ಚರ್ಮಿಗರು ನಾವು....??                                       ನಿರ್ವಚನ, ನಿರ್ಲಜ್ಜ, ನಿರ್ದಾಕ್ಷಿಣ್ಯ ನರನಿಗೆ ಏನೆಂದು ಹೇಳಲಿ.? ಅತೀಯಾದ ವೈಜ್ಞಾನಿಕತೆ ಬುಡಕೆ ಕೊಡಲಿ ಪೆಟ್ಟು ಹಾಕುತಿರುವ ಕಾಲದಲ್ಲಿ. ಮನಬಂದಂತೆ ಪರಕುಲಗಳವಧಿಸಿ ಇಂದು ತನ್ನ ತಾನೇ ಸಾವಿನಾಟದ ಸಾಧನವಾಗಿ ನಿಂತಿರುವ ನರನೇ ನೀನು ಸಾವಿನವರೆಗೂ ಕೆತ್ತಿದರೂ ಶಿಲ್ಪವಾಗದ ಜಗದ ಏಕೈಕ ಜೀವಂತ ಕಲ್ಲು ಎಂಬುದನ್ನು ಬಹು ಬೇಗನೆ      ನಿರೂಪಿಸಿ ಬಿಟ್ಟೆ.  "ನಿಸರ್ಗವೇ ನಿಜವಾದ ಸ್ವರ್ಗ" ಎಂಬ ತರ್ಕವಿಲ್ಲದೆ ಮೂರ್ಖ ಮತಿಯಿಂದ ಮರ್ಜಿಗೆ ಬಂದಂತೆ ಮುನ್ನಡೆದ ನಿನ್ನ ಪ್ರತಿ ನಡೆಯು ಕರೆದೊಯ್ಯದದ್ದು ಮಸಣದ ಕಡೆಯೇ ಹೊರತಾಗಿ ಮಲೆನಾಡ ಕಡೆಗಲ್ಲ. ನಿಸರ್ಗದ ಶಿಶುವಾದ ನೀನು, ಶಿಶುವಾಗುವದು ವಿಸ್ಮರಿಸಿ ತಂದೆಯಾಗುವ ಹಂಬಲ ತೋರಿದೆ. ತಂದೆಗೆ ತಂದೆಯಾಗುವ ಧಂದೆ ಮಾಡುತ್ತ ನಂಬಲಾಗದಂತಹ ಶವಯಾನಕ್ಕೆ ಸಾಕ್ಷಿಯಾದೆ. ನಿನ್ನಂತೆ ಹುಟ್ಟಿದ ಕೋಟ್ಯಾಂತರ ಜೀವರಾಶಿಗಳಿಗೆ ನಿನ್ನಷ್ಠೇ ಹಕ್ಕು, ಅಧಿಕಾರ ಈ ಭೂಮಂಡಲದ ಮೇಲಿಹುದೆಂಬುದನ್ನು ಗಾಳಿಗೆ ತೂರಿದೆ. ನಿನ್ನ ತೂರಾಟಕ್ಕೆ ಅಂದು ತಡೆಯೊಡ್ಡಲಾಗದೆ ಹಾರಿ ಹೋದ ಪ್ರತಿ ಜೀವಿಯ ದೇಹದ ಕಣ ಕಣವೂ ಇಂದು ಜೀವತೆಳೆದು ನಯ...