ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮತ್ತೆ ಹಿಡಿದ ಹಾದಿ

ಇಮೇಜ್
#ಬದುಕು #ಬರಹ...... #ಮತ್ತೆ_ಹಿಡಿದ_ಹಾದಿ..                            ಬದುಕಿನ ದಾರಿಯೇ ಹಾಗೆ ಹಲವು ತಿರುವು ಪಡೆದುಕೊಂಡು ಒಂದು ತಾಣಕ್ಕೆ ಬಂದು ನಿಂತೇ ಅನ್ನುವಷ್ಟರಲ್ಲಿ,  ಆ ನೆಲವೇ ಕುಸಿದು ಬಿದ್ದ ಅನುಭವವಾಗುತ್ತದೆ. ಕಾಲು ಕಿತ್ತಿ ಓಡಬೇಕು ಅನ್ನೋವಷ್ಟರಲ್ಲಿ ಆ ಕಾಲಿಗೆ ಅಲ್ಲಿನ ಮಣ್ಣು ಅಂಟಿಕೊಂಡು ಮೈಯೆಲ್ಲ ಆ ನೆಲದ ನಿಯತ್ತು,  ತಾಕತ್ತು ತುಂಬಿ ಬಿಟ್ಟಿರುತ್ತದೆ....       ಆಗ ಕಾಲಿನ ಶಕ್ತಿ ಕಡಿಮೆಯಾಗಿ ಮಣ್ಣು ಜಯ ಸಾಧಿಸುತ್ತದೆ...  ಅದನ್ನು ಮುಂದೆ ಸಾಗುವ ಕಾಲಿಗೆ ತೊಡಕು ಎನ್ನಬೇಕೋ ??  ಕೆಳಗಿದ್ದ ಮಣ್ಣಿಗೆ ಸೋತ ಪ್ರೀತಿ ಎನ್ನಬೇಕೋ?  ತಿಳಿಯುವುದಿಲ್ಲ....       ಆದರೂ #ಆಚಾರ್ಯ_ರಜನೀಶ್ ಹೇಳುವಂತೆ ನಾವು #ಪ್ರೀತಿಯಲ್ಲಿ_ಎದ್ದೇಳಬೇಕು.  #ಬೀಳಬಾರದು....               ಬೀಳುವವರು ಒಂದು ದೇಹಕ್ಕೂ ರೂಪಕ್ಕೋ ಸೋತು ಒಂದು ದಿನ ಅದು ನಿಜವಾದ ಪ್ರೀತಿ ಅಲ್ಲವೇ ಅಲ್ಲ  ಅನ್ನುವು ಅನುಭವ ಆಗುತ್ತದೆ......   ಆದ್ರೆ ಅದೇ ನಿಜವಾದ ಪ್ರೀತಿಯಲ್ಲಿ ಎದ್ದೇಳುವವ,  ತಾನು ತನಗಾಗಿ ಜಪಿಸುವ ಜನರಿಗಾಗಿ ತನ್ನನ್ನು ಮಹಾನ್ ತ್ಯಾಗಿಯನ್ನಾಗಿ ಮಾಡಿಕೊಳ್ಳುತ್ತ ಹೋಗುತ್ತಾನೆ....

ಅಪಘಾತವೆಂಬ ಆಘಾತ

ಇಮೇಜ್
ಅಪಘಾತವೆಂಬ ಅಘಾತ... ಐಚ್ಚಿಕ ಸ್ನಾಯುಗಳು ಅನೈಚ್ಛಿಕತನದಿಂದ ನಿರಾಕಾರ ಮನಸ್ಸಿನ ನಿಶ್ಚಿತ ವಿಶ್ವಾಸ ಮೂಡುತ್ತದೆ. ಕಲ್ಪನಾ ಲೋಕದಲ್ಲಿ ವಿಕಲ್ಪ ಸಂಚರಿಸಿ ಸಕಲ ಸಂಕಲ್ಪವನ್ನು ವಿಕಲ್ಪ ಮಾಡಿಬಿಡುತ್ತದೆ. ನಮ್ಮದೇ ಭಾಗ ನಮಗೆ ಭಾರವಾದಾಗ ಭಾವ ಬಿರಿದು ಜೀವ ಬೆಂಬತ್ತಿ ಬಿಡುತ್ತದೆ. ಮಾಡಿದ ತಪ್ಪು ಮನದಟ್ಟಾದಾಗ ಹಿಂದೆ ತೆಗೆದುಕೊಂಡ ಕೆಟ್ಟ ನಿರ್ಧಾರ ಗಹಗಹಿಸಿ ನಗುತ್ತದೆ. ಅನಿಶ್ಚಿತ ಬದುಕಿನ ಅವ್ಯಾಹತ ಆಲೋಚನೆಗಳಲ್ಲಿ ತೊಡಗಿರುವ ಮಾನವ ಅನಿರೀಕ್ಷಿತ ನಿರ್ದೇಶಕನ ಕೈಯಲ್ಲಿ ನಟಿಸುವ ಸಂಬಳವಿಲ್ಲದ ಪಾತ್ರಧಾರಿ ಅಲ್ಲದೇ ಮತ್ತೇನೂ ಅಲ್ಲ !! ಜೊತೆಗೆ ಹುಟ್ಟಿದವರು, ಜೊತೆಗೆ ನಡೆಯುವವರ ನಿಜ ಬಣ್ಣ ದರ್ಶನವಾದಗಲೇ ಜಗಜಗಿಸುವ ಮುಖದ ನಗುವಿನ ಜಾಗದಲ್ಲಿ ಜಕ್ಕ (ಯಕ್ಷ)ಪ್ರಶ್ನೆಗಳು ಮನೆ ಮಾಡಿ ಮನದ ಬಿರುಕಿಗೆ ದಾರಿ ತೋರುತ್ತವೆ. ಅನಾಥ ಪ್ರಜ್ಞೆಯ ಅಸ್ಪಷ್ಟ ಕೂಗು ಅಕ್ಕರೆಗೆ ಜಾಗವನ್ನು ಆಕ್ರಮಿಸಿಕೊಂಡು ನಮಗೆ ಸತ್ಯದ ದರ್ಶನವನ್ನು ಮಾಡಿಸಿ ಮೌನಕ್ಕೆ ದೂಡುತ್ತದೆ. ಅನಿಶ್ಚಿತ ಜೀವನವೇ ಆದರೂ, ಆಯುಷ್ಯ ಅಲ್ಪವೇ ಆದರೂ, ಅನುಭವಗಳ ಸಂಕಲನ ಮುಖವಾಡವಿಲ್ಲದ ಮುಖಗಳೊಂದಿಗೆ ಹೆಣೆದುಕೊಂಡಷ್ಟು ಮೈಮನಗಳ ಸುಳಿಯಲ್ಲಿ ಮಂದಹಾಸದ ಮಮತೆ ಹರಿದಾಡುತ್ತಿರುವುದೇ ನಿಜಜೀವನ. ಭೌತಿಕ ಜಗತ್ತಿನ ಯಾವ ವಸ್ತುವೂ ಜನ್ಮಜಾತವಾದ ಮಾಯಾ ಮಣ್ಣಿನ ಕಾಯಕ್ಕೆ ಸಮಾನವಾದದ್ದು ಅಲ್ಲ. ಈ ಕಾಯವೇ ದಣಿದಾಗ ಯಾವ ರಾಯನು ಪ್ರಖರ ಪ್ರಾಯ ಮರಳಿ ನೀಡಲಾರ. ...

ಶಾಂತಳಾದ ಶಾಂತವ್ವಕ್ಕ

ಇಮೇಜ್
ಸಾವು ಅನ್ಯಾಯದ ಸಂತಾನವೇ ಹೌದು.. ಅದಕ್ಕೆ ಯಾವುದೇ ನಿರ್ಧಿಷ್ಟ ಒರೆ ಕೊರೆಗಳಿಲ್ಲ. ಅದರ ಅನುಭವ ಜೀವನದ ಕೊನೆಯ ಪಾಠ. ಅದು ಯಂಥ ವೀರನು ಗೆಲ್ಲಲಾಗದ ಆಟ. ಆ ಹುಡುಗುರು ಟಿ ವಿ ನೋಡಾಕ ಬಂದಾವು ಅವರು ಯಾವಾದು ನೋಡತಾರ ಅದನ್ನ ಹಚ್ಚರಿ, ಬರ್ರೀ ಬರ್ರೀ ಅಪ್ಪಿ ಅಲ್ಲಿ ಯಾಕ ಕುಂಡರತೀರಿ ಪಡಸಾಲ್ಯಾಗೇ ಬರ್ರೀ. ಇ ಮಾತುಗಳನ್ನು ಸರಿಸುಮಾರು 18 ವರ್ಷಗಳ ಹಿಂದೆ ನಮಗಾಗಿ ಉಚ್ಚರಿಸಿದ ಕಂಠ ಇಂದು ಉಸಿರಿಲ್ಲದೆ ಅಮರ ಹೆಸರಾಗಿ ಉಳಿಯಿತು. ಶ್ರೀಮತಿ. ಶಾಂತವ್ವ ಸಿದ್ದಪ್ಪ ಮಂಗಾನವರ. ನನಗೆ ವೈಯಕ್ತಿಕವಾಗಿ ಮಾತೃ ಸ್ವರೂಪಿ(ತಾಯಿ ಸಮಾನ). ನಮ್ಮ ಮನೆಯ ಪಕ್ಕದ ಮನೆಯವರು. ನಾವು 6 ನೇ ತರಗತಿಯಲ್ಲಿದ್ದಾಗ ಅವರ ಮನೆಗೆ ಮೂಡಲಮನೆ, ಮುಕ್ತ ಧಾರವಾಹಿಗಳು ಪ್ರಭಾಕರ, ದೇವರಾಜ ಹಾಗೂ ಶಂಕರನಾಗರವರ ಅನೇಕ ಸಿನೇಮಾ ನೋಡಿದ್ದೆ ಕೊಟೆಪ್ಪಗೋಳರವರ (ಮಂಗಾನವರ)ಮನೆಯಲ್ಲಿ. ಇಸು, ಪ್ರಶಾಂತ ತಗೋರಿ ಇವಿಷ್ಟು ಕಡಬು ಮಾಡಿನಿ ಮಶ್ಯಾಕಗ ಶಿರಸುಗ ಎಲ್ಲಾ ಹುಡಗುರಿಗೂ ಕೋಡ್ರಿ ಎಂದು ಸ್ವಂತ ಮಕ್ಕಳ ಸಮಾನ ಕಂಡ ತಾಯಿ ಇಂದು ಅಮರವಾದ ದಿನ ಅತ್ಯಂತ ನೋವಿನ ದಿನ. ಓಣಿಯಲ್ಲಿನ ಎಲ್ಲ ಜನರ ಪ್ರೀತಿಯ ಶಾಂತವ್ವ ಅಕ್ಕ. ಇಂದು ಬೆಳಿಗ್ಗೆ ಓಣಿಗೆ ನಿಸ್ತೇಜಳಾಗಿ ಶವವಾಗಿ ಬಂದಾಗ ಕೆನ್ನೆ ತೊಯದೆ ಇರಲಿಲ್ಲ. ಪ್ರಾಮಾಣಿಕ ವ್ಯಕ್ತಿತ್ವ , ಮುಕ್ತ ಮನಸ್ಸು, ಮುಗ್ದ ಮುಖ ಚಹರೇ, ಕರುಳ ಬಂಧ ಕಟ್ಟುವಂತ ಧ್ವನಿ, ವಿಶಾಲ ವಿಚಾರದ ಮಾತುಗಳು, ಪ್ರೀತಿ , ಮಮತೆ, ಕರುಣೆ, ಔಧಾರ್ಯ, ವಾತ್ಸಲ್ಯ...