ಮತ್ತೆ ಹಿಡಿದ ಹಾದಿ
#ಬದುಕು #ಬರಹ...... #ಮತ್ತೆ_ಹಿಡಿದ_ಹಾದಿ.. ಬದುಕಿನ ದಾರಿಯೇ ಹಾಗೆ ಹಲವು ತಿರುವು ಪಡೆದುಕೊಂಡು ಒಂದು ತಾಣಕ್ಕೆ ಬಂದು ನಿಂತೇ ಅನ್ನುವಷ್ಟರಲ್ಲಿ, ಆ ನೆಲವೇ ಕುಸಿದು ಬಿದ್ದ ಅನುಭವವಾಗುತ್ತದೆ. ಕಾಲು ಕಿತ್ತಿ ಓಡಬೇಕು ಅನ್ನೋವಷ್ಟರಲ್ಲಿ ಆ ಕಾಲಿಗೆ ಅಲ್ಲಿನ ಮಣ್ಣು ಅಂಟಿಕೊಂಡು ಮೈಯೆಲ್ಲ ಆ ನೆಲದ ನಿಯತ್ತು, ತಾಕತ್ತು ತುಂಬಿ ಬಿಟ್ಟಿರುತ್ತದೆ.... ಆಗ ಕಾಲಿನ ಶಕ್ತಿ ಕಡಿಮೆಯಾಗಿ ಮಣ್ಣು ಜಯ ಸಾಧಿಸುತ್ತದೆ... ಅದನ್ನು ಮುಂದೆ ಸಾಗುವ ಕಾಲಿಗೆ ತೊಡಕು ಎನ್ನಬೇಕೋ ?? ಕೆಳಗಿದ್ದ ಮಣ್ಣಿಗೆ ಸೋತ ಪ್ರೀತಿ ಎನ್ನಬೇಕೋ? ತಿಳಿಯುವುದಿಲ್ಲ.... ಆದರೂ #ಆಚಾರ್ಯ_ರಜನೀಶ್ ಹೇಳುವಂತೆ ನಾವು #ಪ್ರೀತಿಯಲ್ಲಿ_ಎದ್ದೇಳಬೇಕು. #ಬೀಳಬಾರದು.... ಬೀಳುವವರು ಒಂದು ದೇಹಕ್ಕೂ ರೂಪಕ್ಕೋ ಸೋತು ಒಂದು ದಿನ ಅದು ನಿಜವಾದ ಪ್ರೀತಿ ಅಲ್ಲವೇ ಅಲ್ಲ ಅನ್ನುವು ಅನುಭವ ಆಗುತ್ತದೆ...... ಆದ್ರೆ ಅದೇ ನಿಜವಾದ ಪ್ರೀತಿಯಲ್ಲಿ ಎದ್ದೇಳುವವ, ತಾನು ತನಗಾಗಿ ಜಪಿಸುವ ಜನರಿಗಾಗಿ ತನ್ನನ್ನು ಮಹಾನ್ ತ್ಯಾಗಿಯನ್ನಾಗಿ ಮಾಡಿಕೊಳ್ಳುತ್ತ ಹೋಗುತ್ತಾನೆ....