ಕಿಗಳೆಲ್ಲಾ ಕವಿಗಳಾದಾಗ ಭಾಗ ೩

ಕಿವಿಗಳೆಲ್ಲಾ_ಕವಿಗಳಾದಾಗ_ಭಾಗ_ಮೂರು
🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹
ಉಪ ಶೀರ್ಷಿಕೆ :::
ಚೇತನ ಆಗು ನೀ ಅನಿಕೇತನ....

ಅವನೊಬ್ಬ ನಾಲ್ಕನೇ ತರಗತಿಯ ವಿದ್ಯಾರ್ಥಿ, ಮೊನ್ನೆ ನನ್ನ ಬಳಿಗೆ ಬಂದು, ಸಾರ್ ನಾನು ನಾಲ್ಕು ಹಾಡು ಬರೆದಿದ್ದೇನೆ ಚೆಕ್ ಮಾಡ್ತೀರಾ ಅಂದ, ನಾನು ಆಯಿತಪ್ಪ ಮಾರಾಯ ನೀನು ಹಾಡು ಬರದಿದ್ದಿಯಾ ಅಂದೆ..

ಅವನು ಆರೇಳು ಬಾರಿ ಮಡಚಿದ 4 ಚೀಟಿಗಳನ್ನು ನನ್ನ ಕೈಗಿತ್ತ,, ಅವುಗಳನ್ನು ಬಿಚ್ಚಿ ನೋಡಿದ ತಕ್ಷಣ ನನಗೆ ಅನಿಸಿದ್ದೇನು ಗೊತ್ತೆ ಸ್ನೇಹಿತರೆ,,

ಕನ್ನಡ ಸಾಹಿತ್ಯ ನಿಜವಾಗಿಯು ಜಗತ್ತಿನ ಎಲ್ಲ ಸಾಹಿತ್ಯಗಳಿಗಿಂತಲೂ ಅತ್ಯದ್ಭುತವಾದ ಸಾಹಿತ್ಯ ಅಂತ, ಯಾಕೆಂದರೆ ಜಗತ್ತಿನ ಅತೀ ಚಿಕ್ಕ ಕವಿ ಯಾರು ಇರಬಹುದು ಅನ್ನೋ ಪ್ರೆಶ್ನೆ Google ಗೆ ಕೇಳಿದರೆ ಅದು ಹೇಳಿತು 14 ವರ್ಷದ ಹುಡುಗ ಅಂತ ಅದಕ್ಕೇನು ಗೊತ್ತು ಹೇಳಿ ಸಿಂಧುಗೇರಿಯಲ್ಲಿರೋ ಚೇತನ ಕೇವಲ ಹತ್ತು ವರ್ಷದ ಹಸುಳೆ ಅನ್ನೋದು,,, Google ತಲೆ ಸರಿ ಇಲ್ಲ ಅನ್ನಿಸಿತು, ಅದಕ್ಕೆ ನಿಮಗೆ ಹಾಗೂ ಈ ಜಗತ್ತಿಗೆ ಚೇತನನ್ನು ತೋರಸಬೇಕು ಅನ್ನಿಸಿತು, ಅದಕ್ಕೆ climax ವೀಡಿಯೋ ಬಿಟ್ಟೆ....

ಹತ್ತನೇ ತರಗತಿಗೆ ಬಂದರು ಸರಿಯಾಗಿ ಅಕ್ಷರಗಳೆ ಬರೆಯಲು ಬಾರದ ಹಲವಾರು ವಿದ್ಯಾರ್ಥಿಗಳನ್ನು ನಾನು ಮತ್ತು ನೀವು ನೋಡಿದ್ದೇವೆ. ಅಂತಹುದರಲ್ಲಿ ನಮ್ಮ ಶಾಲೆಯ ನಾಲ್ಕನೆ ತರಗತಿಯ ಹಸುಳೆಯೊಂದು ನಾಲ್ಕು ಕವನ ಬರೆದದ್ದು ನೋಡಿ, ನನ್ನ ಕಣ್ಣ ರೆಪ್ಪೆ ಬಡಿದಾಡದೆ ಹೃದಯ ಖುಷಿಯಿಂದ ಕುಣಿದಾಡಿ ಕಾಲು ಸೋತು ಇನ್ನೇನು ಬೀಳುತ್ತೇನೆ ಎನ್ನುವಷ್ಟರಲ್ಲ ಅವನನ್ನು ತಬ್ಬಿಕೊಂಡು ಬಿಟ್ಟೆ ಸ್ನೇಹಿತರೇ....

ಆಗ ನನಗೆ ಕಾಡಿದ ಪ್ರೆಶ್ನೆಗಳೇನು ಗೊತ್ತೆ ??

1) ಚೇತನ ಜಗತ್ತಿನ ಅತೀ ಚಿಕ್ಕ ಸಾಹಿತಿನಾ ???
2) ಇವನಿಗೆ ಗಿನ್ನಿಸ್ ರೆಕಾರ್ಡ್ ಕೋಡ ಬಹುದು ಅಂತ..

ಆಗ ಅವನ ಎದೆಯಿಂದ ನನಗೆ ಬಂದ ಸಂದೇಶವೆನೆಂದರೆ,

ಹೆದರಬೇಡಿ ಸರ್, ಕನ್ನಡ ನಾಡಿನ ಕಣ್ ಕಣ್ ದಲ್ಲೂ ಸಾಹಿತ್ಯ ಇದೆ, ಮುಂದಿನ ಜ್ಞಾನಪೀಠ ಕಿರೀಟ ಕನ್ನಡ ತಾಯಿಯ ಅಡಿಗೆ ನಾವು ಅರ್ಪಿಸುವಲ್ಲಿ ನಾವು ನಮ್ಮ ಭಾಗ ಸಲ್ಲೀಸುತ್ತೇವೆ.. ಅಂದಹಾಗಾಯಿತು, ಮರುದಿನವೇ ಆತ ಎರಡು ಚಿಕ್ಕ ಕತೆಗಳನ್ನು ಬರೆದು ತಂದ, ಅದನ್ನು ನೋಡಿ ಅವನ ಸಂದೇಶ ನಿಜವಾಗುವದು ಖಂಡಿತ ಎನಿಸಿತು..

ನನ್ನ ಪ್ರೀತಿಯ ವಿದ್ಯಾರ್ಥಿಗಳೆ ಸಿಂಧುಗೇರಿ ಗ್ರಾಮವು ಇಂದಿಗೂ ತಾಲೂಕಿನಲ್ಲಿ ಪರಿಚಯವಿಲ್ಲದ ಗ್ರಾಮ,
ನನ್ನ ಕಲ್ಪನೆಯಂತೆ ಒಂದಲ್ಲ ಒಂದು ದಿನ ನಮ್ಮ ಸಿಂಧುಗೇರಿಯು ತಾಲೂಕಿನ ಅತೀ ಹೆಚ್ಚು ಸಾಹಿತಿಗಳನ್ನು ಹೊಂದಿರುವ ಗ್ರಾಮವಾಗುತ್ತೆ ಅನ್ನೋ ನಂಬಿಕೆ ನನಗಂತೂ
ಸಂಪೂರ್ಣ ಇದೆ, ಅದು ನಿಮ್ಮಿಂದಲೆ ಶುರುವಾಗಿದೆ, ಕೊನೆಯಾಗದಿರಲಿ...
ಸ್ನೇಹಿತರೇ,

ನಾನು ಪ್ರತಿ ಬಾರಿ ನನ್ನ ಕವನವನ್ನು ವಾಚನ ಮಾಡಿದಾಗ ಹಾಗೂ ಹಾಡಿದಾಗ ಕೇಳಿದಂತ ಕಿವಿಗಳೆಲ್ಲ ಇಂದು ಕವಿಗಳಾಗಿ ನನ್ನೆದುರೇ ನಿಂತಿದ್ದಾರೆ..

ಪ್ರತಿದಿನ ತಮ್ಮ ಕವಿತೆಗಳನ್ನು ತೋರಿಸಲು ಬರುತ್ತಿದ್ದಾರೆ !!

ಶಾಲಾ ಪ್ರಾರ್ಥನೆ ಯಲ್ಲಿ ವಾಚನ ಮಾಡುತ್ತಿದ್ದಾರೆ !!

ಸೃಷ್ಟಿಯ ವೈಚಿತ್ರ್ಯಗಳನ್ನು ಕವಿತೆಯಲ್ಲಿ ಸೆರೆ ಹಿಡಿಯುತ್ತಿದ್ದಾರೆ !!

ಚಪ್ಪಾಳೆ ತಟ್ಟಿದವರೇ ಚಪ್ಪಾಳೆ ಗಿಟ್ಟಿಸಿದ್ದಾರೆ !!

ತಮ್ಮ ಸ್ನೆಹಿತರಲ್ಲಿ ಸಾಹಿತ್ಯದ ಬೀಜ ಬಿತ್ತುತ್ತಿದ್ದಾರೆ !!

ನಿಜವಾಗಿಯೂ ನನಗಿನ್ನೂ ತಿಳಿಯುತಿಲ್ಲ

#ಈ_ಕಿವಿಗಳೆಲ್ಲಾ_ಹೇಗೆ_ಕವಿಗಳಾಗಿದ್ದಾರೆ ?????? !!!!!!!!!!!!
ಇದಕ್ಕೆಲ್ಲಾ ಸಹಕಾರ್ ಹಾಗೂ ಸಾಹಾಯ ನೀಡುವ ನಮ್ಮ ಮುಖ್ಯ ಗುರುಗಳಾದ ಕು. ಎಸ್ ಎಸ್ ಎಲಿಬಳ್ಳಿ ಗುರುಗಳಿಗೆ, ಬೊಮ್ಮನ್ ಜೋಗಿ ಗುರುಗಳಿಗೆ, ಶ್ರೀಕಾಂತ ಗುರುಗಳಿಗೆ, ಖಾನ್ ಗೌಡರ ಹಾಗೂ ಮಾಲಾಪುರ ಗುರುಮಾತೆಯರಿಗೆ
ನಾನು ಅನಂತ ಕೋಟಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ..🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹

ನನ್ನ ಪ್ರೀತಿಯ ವಿದ್ಯಾರ್ಥಿ ಬಳಗಕ್ಕೂ ಕೋಟಿ ಕೋಟಿ ಧನ್ಯವಾದಗಳು...
🌹🌹🌹🌹🌹🌹🌹🌹🌹🌹🌹🌹🌹🌹🌹🌹

ಲೇಖನ ಓದಿದ ಹೃದಯವಂತ ಓದುಗರಿಗೆ ಧನ್ಯವಾದಗಳು

🌹🌹🌹🌿🌿🌿🌿🌿🌿🌿🌿🌹🌹🌹🌹🌹
ಇಂತಿ ನಿಮ್ಮ ಕವಿ ಗೆಳೆಯ
🌴🌴#ಎಂ ಜಿ _ಸರ್ 🌴🌴
#ಸಾ__ಯಂಭತ್ನಾಳ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿವಿಗಳೆಲ್ಲಾ ಕವಿಗಳಾದಾಗ ಭಾಗ ೧

ಕಿವಿಗಳೆಲ್ಲ_ಕವಿಗಳಾದಾಗ_ಭಾಗ ೨